TNIEಯಿಂದ 'ಜಾಗೋ ಹಿಂದೂಸ್ತಾನಿ', ಯುವಜನತೆ ದೇಶದ ಇತಿಹಾಸ ತಿಳಿದುಕೊಂಡು ಕೃತಜ್ಞರಾಗಿರಬೇಕು: ಕಲಬುರಗಿ ಡಿಸಿ ‘ಜಾಗೋ ಹಿಂದುಸ್ತಾನಿ’ಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಿಗೆ ಅದರಲ್ಲೂ ಯುವಜನತೆಗೆ ಇತಿಹಾಸದಲ್ಲಿ ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ದೇಶವಾಸಿಗಳನ್ನು ರಕ್ಷಿಸಲು ಸೈನಿಕರು ವಹಿಸಿದ ಪಾತ್ರ ಮತ್ತು ತ್ಯಾಗದ ಬಗ್ಗೆ ತಿಳಿಸಿಕೊಡುತ್ತಿದೆ ಎಂದರು. ಕಲಬುರಗಿ: ಗತಕಾಲದ ಇತಿಹಾಸವನ್ನು ತಿಳಿದುಕೊಂಡರೆ ಮಾತ್ರ ನಾವು ಇತಿಹಾಸ ನಿರ್ಮಿಸಲು ಸಾಧ್ಯ ಎಂಬ ಮಾತನ್ನು ಖ್ಯಾತ ಇಂಗ್ಲಿಷ್ ದೈನಿಕ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್( ) ಜಾಗೋ ಹಿಂದೂಸ್ತಾನಿಯಂತಹ ದೇಶಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಿ ತೋರಿಸುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನುಮ್ ಹೇಳಿದ್ದಾರೆ.ಮೊನ್ನೆ ಶುಕ್ರವಾರ ಸಂಜೆ ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಜಾಗೋ ಹಿಂದೂಸ್ತಾನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಫೌಜಿಯಾ ತರನಮ್, ‘ಜಾಗೋ ಹಿಂದುಸ್ತಾನಿ’ಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಿಗೆ ಅದರಲ್ಲೂ ಯುವಜನತೆಗೆ ಇತಿಹಾಸದಲ್ಲಿ ಯುದ್ಧಗಳು ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ದೇಶವಾಸಿಗಳನ್ನು ರಕ್ಷಿಸಲು ಸೈನಿಕರು ವಹಿಸಿದ ಪಾತ್ರ ಮತ್ತು ತ್ಯಾಗದ ಬಗ್ಗೆ ತಿಳಿಸಿಕೊಡುತ್ತಿದೆ ಎಂದರು.ಇಂತಹ ಕಾರ್ಯಕ್ರಮಗಳು ನಮ್ಮ ಸೈನಿಕರಿಗೆ ನಮ್ಮ ಕೃತಜ್ಞತೆಯನ್ನು ತಿಳಿಸಲು ಸಹಾಯ ಮಾಡುತ್ತದೆ. ನಮ್ಮ ಯುವಕರನ್ನು ಸಶಸ್ತ್ರ ಪಡೆಗಳಿಗೆ ಸೇರಲು ಪ್ರೇರೇಪಿಸುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಕರ್ನಲ್ ಪ್ರಲ್ಹಾದ ಕುಲಕರ್ಣಿ, ಯುವಕರು ಭವಿಷ್ಯದ ಜ್ಯೋತಿ ಬೆಳಗಿಸುವವರಾಗಬೇಕೆಂದು ಕರೆ ನೀಡಿದರು.ಕಾರ್ಗಿಲ್‌ ಕಥೆಯು ಕೇವಲ ಯುದ್ಧದಲ್ಲಿ ವಿಜಯದ ಬಗ್ಗೆ ಅಲ್ಲ, ಇದು ಗುರಿಗಳ ನಿರಂತರ ಅನ್ವೇಷಣೆ, ಏಕತೆಯ ಶಕ್ತಿ ಮತ್ತು ದೇಶಭಕ್ತಿಯ ಸಾರದ ಬಗ್ಗೆಯೂ ತಿಳಿಸುತ್ತದೆ. ನಮ್ಮ ಸೈನಿಕರು ಎಲ್ಲಾ ವಿಲಕ್ಷಣಗಳ ವಿರುದ್ಧ, ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ, ಸೀಮಿತ ಸಂಪನ್ಮೂಲಗಳೊಂದಿಗೆ ಹೋರಾಡಿ ಇನ್ನೂ ವಿಜಯಶಾಲಿಯಾಗಿದ್ದಾರೆ ಎಂದರು.ಉತ್ತರ ಕರ್ನಾಟಕದ ಸಹಾಯಕ ಪ್ರಧಾನ ವ್ಯವಸ್ಥಾಪಕ ಸತೀಶ್ ಜೋಶಿ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದ ಖ್ಯಾತ ಕಲಾವಿದರ ‘ಸ್ವರನಿನಾದ’ ತಂಡವು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಸ್ವರನಿನಾದ ಪ್ರಸ್ತುತಪಡಿಸಿದ ಕಾರ್ಯಕ್ರಮವು ಭಾರತೀಯ ಸಂಸ್ಕೃತಿ, ಸ್ವಾತಂತ್ರ್ಯ ಚಳವಳಿ ಮತ್ತು ಪ್ರಸ್ತುತ ಸಾಮಾಜಿಕ ಪರಿಸ್ಥಿತಿಗಳ ವಿಷಯದ ಮೇಲೆ ಆಧಾರಿತವಾಗಿತ್ತು.